ಓ ಒಲವೇ, ಬಂದು ಬೀಡು ತಡ ಮಾಡದೆ
ಕೊಂದು ಬೀಡು ಈ ಏಕಾಂತವನು ಚೂರು ದಯೆ ತೋರದೆ..
ಅರಿಘಳಿಗೆ ಯೋಚಿಸದೆ ಜಗದ ಹಂಗು ತೊರೆದು,
ಭವದ ಬಂಧಗಳನು ಮುರಿದು
ಬಾನಾಡಿಯಾಗಿ ಬಂದು ಬೀಡು ಈ ಮನದಂಗಳಕೆ..!!
ಆಕಾಶದೆತ್ತರಕೆ ನಿಂತ ಪರ್ವತಕೆ ಅಹಂಕಾರದ ಗತ್ತು
ಆದರೆ ಕಾಲಿಗೆ ಬಂಧನದ ಸರಪಳಿ..!!
ನೀನೋ ಹೂಮನ ಚುಂಬಿಸುವ ದುಂಭಿ,
ಹೂವಿಂದ ಮಕರಂದ ಹೀರುವ ಸ್ವಾತಂತ್ರ್ಯ ನಿನ್ನದು,
ಹೂವಿಂದ ಹೂವಿಗೆ ಹಾರಿ, ಶರವೇಗದಿ, ಸಪ್ತಸಾಗರಳನು ದಾಟಿ
ಈ ಮನದಿ ಮಿಚಾಗಿ ಸಂಚರಿಸಿಬೀಡು..
ಓ ಒಲವೇ ನೀ ಬೇಗ ಬಂದು ಬೀಡು.
ಕಪ್ಪು ಕವಿದ ಕಾರ್ಮೋಡಗಳ ಬಡಿದೋಡಿಸಿ
ಕಾಮನ ಬಣ್ಣಗಳಲಿ ಮಿಂದು,ತಂಗಾಳಿನ ತಮ್ಪಿನೊಡನೆ,
ಉಲ್ಲಾಸ ಲಹರಿಯಾಗಿ ಮನದಿ ನೆಲೆಸಿಬೀಡು..
ಕಂಗಳೀಗೆ ನಿನ್ನ ಪ್ರತಿಭಿಂಬ ತೋರಿಬೀಡು..
ಓ ಒಲವೇ ನೀ ಬೇಗ ಬಂದು ಬೀಡು.
ನೀತಿ-ನಿಯಮಗಳು,ಕಷ್ಟದ ಕಟ್ಟುಪಾಡುಗಳು
ಈ ಮಾನವ ನಿರ್ಮಿತ ಲೋಕಕೆ, ಅದರ ದಾಸರಿಗೆ..!!
ನೀನೋ ಜೀವನದಿಯಂತೆ,ಭಾವಗಂಗೆಯಂತೆ...
ಜುಳು-ಜುಳು ಹರಿಯುತ ಬಂದುಬೀಡು,
ನನ್ನ ನರನಾಡಿಗಳಲಿ ಬೇರೆತುಬೀಡು..
ಓ ಒಲವೇ ನೀ ಬೇಗ ಬಂದು ಬೀಡು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ