ಮರಳಿ ಮನಕೆ..
ಇರುಳಿನಿಂದ ಬೆಳಕಿನೆಡೆಗೆ ಪಯಣ..
ಬುಧವಾರ, ಡಿಸೆಂಬರ್ 19, 2012
ಹೇ ಮಾನವ,ಎಲ್ಲಿ ನಿನ್ನ ಮಾನವೀಯತೆ?
ಹೇ ಮಾನವ,ಎಲ್ಲಿ ನಿನ್ನ ಮಾನವೀಯತೆ?
ನೀ ಮರೆತೆರುವೆ ನಿನ್ನ ಹೆತ್ತ ತಾಯಿಯ ಮಮತೆ..!!
ಸೀತೆಯ ಸೀರೆಗೆ ಕೈ ಹಾಕುತಿರುವೆ ನೀನು,
ಆ ರಾವಣನ ಅವಸಾನದ ಹಾದಿಯ ಹೀಡಿದಿರುವೆ ನೀನು..!!
ಹೇ ಮಾನವ,ಎಲ್ಲಿ ನಿನ್ನ ಮಾನವೀಯತೆ?
ನಿನ್ನ,ಈ ಭುವಕೆ ತಂದವಳು ಆ ಮಹಾತಾಯಿ ನಾರಿ,
ತನ್ನೊಡಲ ಕರುಣೆಯಿಂದ ಬದುಕಿಗೆ ತೋರಿದಳು ದಾರಿ.
ಅಂದು ನಿನ್ನ ಜೀವಕೆ ಜೀವವ ನೀಡಿದವಳು ಅವಳು,
ಇಂದು ನಿನ್ನ ಹೇಯ ಕ್ರುತ್ಯಕೆ, ಕೊಲೆಯಾದವಳು ಅವಳು..!!
ಹೇ ಮಾನವ,ಎಲ್ಲಿ ನಿನ್ನ ಮಾನವೀಯತೆ?
ಬಾಲ್ಯದಲಿ ಸೋದರಿಯಾಗಿ ನಿನ್ನ ಒಂಟಿತನವ ಮರೆಸಿದವಳು ಅವಳು,
ತನ್ನ ಸಿಹಿಯ ಸದಾ ನಿನ್ನೊಂದಿಗೆ ಹಂಚಿ ಕೊಂಡವಳು ಅವಳು..!!
ಇಂದು, ನಿನ್ನ ಅಮಾನುಷ ವರ್ತನೆಗೆ ಬಲಿಯಾಗಿಹಳು,
ಹಗಲಿರುಳು ಅಂಜಿಕೆಯಲೇ ಬಾಳ ಬಂಡಿಯ ದೂಕುತಿಹಳು..!!
ಹೇ ಮಾನವ,ಎಲ್ಲಿ ನಿನ್ನ ಮಾನವೀಯತೆ?
ನಲ್ಲೆಯಾಗಿ,ಮಡದಿಯಾಗಿ,ಬಾಳಿಗೆ ಭಾವ-ಜೀವ ತುಂಬಿದವಳು ಅವಳು,
ಗೆಳತಿಯಾಗಿ,ಸಹಪಾಟಿಯಾಗಿ, ನಿನ್ನ ಯಶಸ್ಸಿಗೆ ಮೆಟ್ಟಿಲಾದವಳು ಅವಳು..!!
ಓ ಮನುಜಾ, ನೀ ಮರೆತಿರುವೆ ಅವಳು ತಂದುಕೊಟ್ಟ ಭಾಗ್ಯವ,ಅವಳ ಆ ತ್ಯಾಗವ,
ಎಚ್ಚರಾ ಮೂಢ, ನೀ ತೊಡುತಿರುವೆ ನಿನ್ನ ವಿನಾಶದ ಗುಂಡಿಯ..!!
ಹೇ ಮಾನವ,ಎಲ್ಲಿ ನಿನ್ನ ಮಾನವೀಯತೆ?
ನಿನ್ನ ಈ ಮಹಾಪಾಪಕಿಲ್ಲವೋ ಯಾವ ಪ್ರಾಯಶ್ಚಿತ, ನಿನ್ನ ಕೈಯಿಂದಲೇ ನಿನ್ನ ಸಾವು ನಿಶ್ಚಿತ..!!
ಹೇ ಮಾನವ,ಎಲ್ಲಿ ನಿನ್ನ ಮಾನವೀಯತೆ?
- Siddappa Mullalli
ಬುಧವಾರ, ಜೂನ್ 27, 2012
ನಾ ಬರಿಯಬೇಕು, ನಾ ಬದುಕಬೇಕು..!!
ನಾ ಬರಿಯಬೇಕು, ನಾ ಬದುಕಬೇಕು
ಆದರೆ ಏನು ಬರೆಯಲಿ ? ಏಕೆ ಬರೆಯಲಿ ?
ಬರೆಯಲು ನನ್ನ ಬಳಿ ಪದಗಳಿಲ್ಲ,
ಪದಗಳ ಪೋಣಿಸುವ ನೈಪುಣ್ಯತೆಯೂ ನನ್ನಲಿಲ್ಲಾ..
ಆದರೂ ನಾ ಬರೀಯಬೇಕು..!!
ಬದುಕಲು ನನ್ನ ಬಳಿ ಆಸಗಳಿಲ್ಲ,
ಬದುಕಬೇಕೆಂಬ ಆಸೆಯೇ ನನಗಿಲ್ಲ,
ಆದರೂ ನಾ ಬದುಕಬೇಕು....
ದೇಶದಗಲಕ್ಕೂ ಹರಿದಾಡುವ ಗಂಗೆ ಪಾಪ ತೊಳೆವಳು
ನಾಡಿನಲ್ಲಿ ಹರಿಯುವ ತುಂಗೆ ದಾಹ ತೀರುವಳು
ನಿತ್ಯ ಉದಯಿಸುವ ಸೂರ್ಯ ಬೆಳಕ ನೀಡುವನು
ರಾತ್ರಿ ಕಂಗೊಳಿಸುವ ಚಂದ್ರ ತಂಪ ಸುರಿವನು
ಚೂರು ಆಯಾಸಗೊಲ್ಲದೆ ಭೂತಾಯಿ ಜಗದ ಭಾರ ಹೊರುವಳು
ಮಳೆಯ ಪ್ರತಿ ಹನಿಯೂ ಧರಣಿಯ ಹಸಿ ಮಾಡುವುದು
ಕಡಲ ಪ್ರತಿ ಅಲೆಯೂ ತೀರದ ಮೈ ತೊಳೆಯುವುದು
ಬೆಳಕಿನ ಪ್ರತಿ ಕಿರಣವು ಕತ್ತಲೆ ಹೊಡೆದೋಡಿಸುವುದು
ಅನ್ನದ ಪ್ರತಿ-ಕಾಳು ಹಸಿವ ನೀಗಿಸುವುದು
ಪ್ರತಿ ಬ್ರಹ್ಮಸೃಷ್ಟಿಗೂ ಒಂದು ಉದ್ದೇಶವಿದೆಯಲ್ಲವೇ ?
ಹೌದಾದರೆ, ಈ ನನ್ನ ಮಾನವ ಜನ್ಮಕೂ ಒಂದು ಉದೀಶವೀರಲೇಬೇಕು,
ಆ ಉದ್ದೇಶವ ನಾನರಿಯಬೇಕು...
ನನ್ನ ನಾ ತಿಳಿಯಲು ನಾ ಬರೀಯಬೇಕು
ಈ ಆತ್ಮಜ್ಯೋತಿಯ ಸಾಕ್ಷಾತ್ಕಾರಕ್ಕೆ ನಾ ಬದುಕಲೇಬೇಕು...!!
ಹೌದು, ನಾ ಬರೀಯಬೇಕು, ನಾ ಬದುಕಬೇಕು...!!!
ಆದರೆ ಏನು ಬರೆಯಲಿ ? ಏಕೆ ಬರೆಯಲಿ ?
ಬರೆಯಲು ನನ್ನ ಬಳಿ ಪದಗಳಿಲ್ಲ,
ಪದಗಳ ಪೋಣಿಸುವ ನೈಪುಣ್ಯತೆಯೂ ನನ್ನಲಿಲ್ಲಾ..
ಆದರೂ ನಾ ಬರೀಯಬೇಕು..!!
ಬದುಕಲು ನನ್ನ ಬಳಿ ಆಸಗಳಿಲ್ಲ,
ಬದುಕಬೇಕೆಂಬ ಆಸೆಯೇ ನನಗಿಲ್ಲ,
ಆದರೂ ನಾ ಬದುಕಬೇಕು....
ದೇಶದಗಲಕ್ಕೂ ಹರಿದಾಡುವ ಗಂಗೆ ಪಾಪ ತೊಳೆವಳು
ನಾಡಿನಲ್ಲಿ ಹರಿಯುವ ತುಂಗೆ ದಾಹ ತೀರುವಳು
ನಿತ್ಯ ಉದಯಿಸುವ ಸೂರ್ಯ ಬೆಳಕ ನೀಡುವನು
ರಾತ್ರಿ ಕಂಗೊಳಿಸುವ ಚಂದ್ರ ತಂಪ ಸುರಿವನು
ಚೂರು ಆಯಾಸಗೊಲ್ಲದೆ ಭೂತಾಯಿ ಜಗದ ಭಾರ ಹೊರುವಳು
ಮಳೆಯ ಪ್ರತಿ ಹನಿಯೂ ಧರಣಿಯ ಹಸಿ ಮಾಡುವುದು
ಕಡಲ ಪ್ರತಿ ಅಲೆಯೂ ತೀರದ ಮೈ ತೊಳೆಯುವುದು
ಬೆಳಕಿನ ಪ್ರತಿ ಕಿರಣವು ಕತ್ತಲೆ ಹೊಡೆದೋಡಿಸುವುದು
ಅನ್ನದ ಪ್ರತಿ-ಕಾಳು ಹಸಿವ ನೀಗಿಸುವುದು
ಪ್ರತಿ ಬ್ರಹ್ಮಸೃಷ್ಟಿಗೂ ಒಂದು ಉದ್ದೇಶವಿದೆಯಲ್ಲವೇ ?
ಹೌದಾದರೆ, ಈ ನನ್ನ ಮಾನವ ಜನ್ಮಕೂ ಒಂದು ಉದೀಶವೀರಲೇಬೇಕು,
ಆ ಉದ್ದೇಶವ ನಾನರಿಯಬೇಕು...
ನನ್ನ ನಾ ತಿಳಿಯಲು ನಾ ಬರೀಯಬೇಕು
ಈ ಆತ್ಮಜ್ಯೋತಿಯ ಸಾಕ್ಷಾತ್ಕಾರಕ್ಕೆ ನಾ ಬದುಕಲೇಬೇಕು...!!
ಹೌದು, ನಾ ಬರೀಯಬೇಕು, ನಾ ಬದುಕಬೇಕು...!!!
ಕೊನೆ..!!
ಕೊನೆ..!!
'ಕೊನೆ'ಯೂ ಕೊನೆಯಾಗದೆ ಕೊನೆವರೆಗೂ ಕಾಡುತಿಹುದೆತಕೆ?
'ಕೊನೆ'ಗೂ ಕೊನೆಯುಂಟೆ?
'ಕೊನೆ'ಗೆ ಕೊನೆ ಕಾಣಿಸುವವರಾರು?
'ಕೊನೆ'ಯೂ ಅದೆಷ್ಟು ಜನರ ಬಾಳಿಗೆ ಕೊನೆಯುಣಿಸಿದೆ ಎಂಬ ಲೆಕ್ಕ ಉಂಟೆ?
ಕೆಲವೊಮ್ಮೆ ಕೊನೆಯಾಯಿತು ಎಂದುಕೊಳ್ಳುವಾಗಲೇ ಮತ್ತೊಂದು 'ಕೊನೆ'ಯಾ ಜನನ,
ಕೊನೆ-ಕೊನೆ ಸೇರಿ ಬಲೂ ಕಟೀಣ ಈ ಜೀವನ...
ಕೊನೆಗಳ ಜನನಕಿಲ್ಲ ಮರಣ,
ಮುಂದೊಂದು ದಿನ ಕೊನೆಗಲಿಂದಲೇ ಜೀವ-ಹರಣ..!!!
'ಕೊನೆ'ಯೂ ಕೊನೆಯಾಗದೆ ಕೊನೆವರೆಗೂ ಕಾಡುತಿಹುದೆತಕೆ?
'ಕೊನೆ'ಗೂ ಕೊನೆಯುಂಟೆ?
'ಕೊನೆ'ಗೆ ಕೊನೆ ಕಾಣಿಸುವವರಾರು?
'ಕೊನೆ'ಯೂ ಅದೆಷ್ಟು ಜನರ ಬಾಳಿಗೆ ಕೊನೆಯುಣಿಸಿದೆ ಎಂಬ ಲೆಕ್ಕ ಉಂಟೆ?
ಕೆಲವೊಮ್ಮೆ ಕೊನೆಯಾಯಿತು ಎಂದುಕೊಳ್ಳುವಾಗಲೇ ಮತ್ತೊಂದು 'ಕೊನೆ'ಯಾ ಜನನ,
ಕೊನೆ-ಕೊನೆ ಸೇರಿ ಬಲೂ ಕಟೀಣ ಈ ಜೀವನ...
ಕೊನೆಗಳ ಜನನಕಿಲ್ಲ ಮರಣ,
ಮುಂದೊಂದು ದಿನ ಕೊನೆಗಲಿಂದಲೇ ಜೀವ-ಹರಣ..!!!
ಮಂಗಳವಾರ, ಜನವರಿ 17, 2012
ಶನಿವಾರ, ಜನವರಿ 14, 2012
ಓ ಒಲವೇ ನೀ ಬೇಗ ಬಂದು ಬೀಡು.
ಓ ಒಲವೇ, ಬಂದು ಬೀಡು ತಡ ಮಾಡದೆ
ಕೊಂದು ಬೀಡು ಈ ಏಕಾಂತವನು ಚೂರು ದಯೆ ತೋರದೆ..
ಅರಿಘಳಿಗೆ ಯೋಚಿಸದೆ ಜಗದ ಹಂಗು ತೊರೆದು,
ಭವದ ಬಂಧಗಳನು ಮುರಿದು
ಬಾನಾಡಿಯಾಗಿ ಬಂದು ಬೀಡು ಈ ಮನದಂಗಳಕೆ..!!
ಆಕಾಶದೆತ್ತರಕೆ ನಿಂತ ಪರ್ವತಕೆ ಅಹಂಕಾರದ ಗತ್ತು
ಆದರೆ ಕಾಲಿಗೆ ಬಂಧನದ ಸರಪಳಿ..!!
ನೀನೋ ಹೂಮನ ಚುಂಬಿಸುವ ದುಂಭಿ,
ಹೂವಿಂದ ಮಕರಂದ ಹೀರುವ ಸ್ವಾತಂತ್ರ್ಯ ನಿನ್ನದು,
ಹೂವಿಂದ ಹೂವಿಗೆ ಹಾರಿ, ಶರವೇಗದಿ, ಸಪ್ತಸಾಗರಳನು ದಾಟಿ
ಈ ಮನದಿ ಮಿಚಾಗಿ ಸಂಚರಿಸಿಬೀಡು..
ಓ ಒಲವೇ ನೀ ಬೇಗ ಬಂದು ಬೀಡು.
ಕಪ್ಪು ಕವಿದ ಕಾರ್ಮೋಡಗಳ ಬಡಿದೋಡಿಸಿ
ಕಾಮನ ಬಣ್ಣಗಳಲಿ ಮಿಂದು,ತಂಗಾಳಿನ ತಮ್ಪಿನೊಡನೆ,
ಉಲ್ಲಾಸ ಲಹರಿಯಾಗಿ ಮನದಿ ನೆಲೆಸಿಬೀಡು..
ಕಂಗಳೀಗೆ ನಿನ್ನ ಪ್ರತಿಭಿಂಬ ತೋರಿಬೀಡು..
ಓ ಒಲವೇ ನೀ ಬೇಗ ಬಂದು ಬೀಡು.
ನೀತಿ-ನಿಯಮಗಳು,ಕಷ್ಟದ ಕಟ್ಟುಪಾಡುಗಳು
ಈ ಮಾನವ ನಿರ್ಮಿತ ಲೋಕಕೆ, ಅದರ ದಾಸರಿಗೆ..!!
ನೀನೋ ಜೀವನದಿಯಂತೆ,ಭಾವಗಂಗೆಯಂತೆ...
ಜುಳು-ಜುಳು ಹರಿಯುತ ಬಂದುಬೀಡು,
ನನ್ನ ನರನಾಡಿಗಳಲಿ ಬೇರೆತುಬೀಡು..
ಓ ಒಲವೇ ನೀ ಬೇಗ ಬಂದು ಬೀಡು.
ಕೊಂದು ಬೀಡು ಈ ಏಕಾಂತವನು ಚೂರು ದಯೆ ತೋರದೆ..
ಅರಿಘಳಿಗೆ ಯೋಚಿಸದೆ ಜಗದ ಹಂಗು ತೊರೆದು,
ಭವದ ಬಂಧಗಳನು ಮುರಿದು
ಬಾನಾಡಿಯಾಗಿ ಬಂದು ಬೀಡು ಈ ಮನದಂಗಳಕೆ..!!
ಆಕಾಶದೆತ್ತರಕೆ ನಿಂತ ಪರ್ವತಕೆ ಅಹಂಕಾರದ ಗತ್ತು
ಆದರೆ ಕಾಲಿಗೆ ಬಂಧನದ ಸರಪಳಿ..!!
ನೀನೋ ಹೂಮನ ಚುಂಬಿಸುವ ದುಂಭಿ,
ಹೂವಿಂದ ಮಕರಂದ ಹೀರುವ ಸ್ವಾತಂತ್ರ್ಯ ನಿನ್ನದು,
ಹೂವಿಂದ ಹೂವಿಗೆ ಹಾರಿ, ಶರವೇಗದಿ, ಸಪ್ತಸಾಗರಳನು ದಾಟಿ
ಈ ಮನದಿ ಮಿಚಾಗಿ ಸಂಚರಿಸಿಬೀಡು..
ಓ ಒಲವೇ ನೀ ಬೇಗ ಬಂದು ಬೀಡು.
ಕಪ್ಪು ಕವಿದ ಕಾರ್ಮೋಡಗಳ ಬಡಿದೋಡಿಸಿ
ಕಾಮನ ಬಣ್ಣಗಳಲಿ ಮಿಂದು,ತಂಗಾಳಿನ ತಮ್ಪಿನೊಡನೆ,
ಉಲ್ಲಾಸ ಲಹರಿಯಾಗಿ ಮನದಿ ನೆಲೆಸಿಬೀಡು..
ಕಂಗಳೀಗೆ ನಿನ್ನ ಪ್ರತಿಭಿಂಬ ತೋರಿಬೀಡು..
ಓ ಒಲವೇ ನೀ ಬೇಗ ಬಂದು ಬೀಡು.
ನೀತಿ-ನಿಯಮಗಳು,ಕಷ್ಟದ ಕಟ್ಟುಪಾಡುಗಳು
ಈ ಮಾನವ ನಿರ್ಮಿತ ಲೋಕಕೆ, ಅದರ ದಾಸರಿಗೆ..!!
ನೀನೋ ಜೀವನದಿಯಂತೆ,ಭಾವಗಂಗೆಯಂತೆ...
ಜುಳು-ಜುಳು ಹರಿಯುತ ಬಂದುಬೀಡು,
ನನ್ನ ನರನಾಡಿಗಳಲಿ ಬೇರೆತುಬೀಡು..
ಓ ಒಲವೇ ನೀ ಬೇಗ ಬಂದು ಬೀಡು.
ಮಡಿದ ಕವನ
ಧರೆಯ ಮಡಿಲಿಂದ ಹನಿಯು ಮೇಲಕ್ಕೆ ಪುಟಿದು ಬಾನ ಸೇರುವದು,
ಬಾನು ತನ್ನೊಡಲ ಬಿಸಿಯ ತಾಗಿಸಿ ಹನಿಗೆ ಭೂಮಿಯ ದಾರಿ ತೋರುವುದು,
ಧರೆಯ ಮಡಿಲು ಹನಿಗಿಲ್ಲ, ಬಾನ ಒಡಲು ಸಿಗಲಿಲ್ಲ..!!
ಬದುಕಿಯೂ ಸತ್ತ ಭಾವವೇ ಕೊನೆಗೆಲ್ಲಾ...
ಇದುವೇ ನನ್ನ ಮಡಿದ ಕವನ.
ಅಲೆಗಳ ಸ್ಪರ್ಶಕೆ ಮನಸೋತ ದಡವು ಹಸಿಯಾಗುವುದು
ನಂಬಿದಲೆಗಳು ಕ್ಷಣದೊಳು ಹಿಂದೆ ಸರಿಯೇ, ದಡವು ಏಕಾಂಗಿಯಾಗುವುದು.
ಮಲಗಿದ್ದ ದಡಕೆ ಹಸಿ-ಭಾವ ನೀಡಿ, ಸ್ವಪ್ನಗಳ ಹುಸಿಯ ಮಾಡಿ
ಸಮಯ ಅನುಕಿಸಿ ನಗುತಿರೆ, ಇದ್ದು ಇರದ ಭಾವದ ಅನಾವರಣ
ಇದುವೇ ನನ್ನ ಮಡಿದ ಕವನ.
ದೇವ,ಯಾರು ಇರದ ಹೃದಯ ಮಂದಿರದಿ, ಒಲವ ದೇವತೆಯ ಕೂಡಿಸಿದೆ
ನಾ ಪೂಜೆಗೆ ಅಡಿಯಾಗುವಂತೆ ಮಾಡಿ, ಮುಡಿಗೆ ಹೂ ತರಲು ಹೋದ ಸಮಯದಿ
ಕ್ಷಣದಲಿ ಒಲವ ದೇವಿಯ ಕಣ್ಮರೆ ಮಾಡಿದೆ
ದೇವರಿಲ್ಲದ ದೇವಾಲಯದಿ, ಉಸಿರಾಡುವ ಶವ ನಾನಾದೆ
ಇದುವೇ ನನ್ನ ಮಡಿದ ಕವನ.
ಬಾನು ತನ್ನೊಡಲ ಬಿಸಿಯ ತಾಗಿಸಿ ಹನಿಗೆ ಭೂಮಿಯ ದಾರಿ ತೋರುವುದು,
ಧರೆಯ ಮಡಿಲು ಹನಿಗಿಲ್ಲ, ಬಾನ ಒಡಲು ಸಿಗಲಿಲ್ಲ..!!
ಬದುಕಿಯೂ ಸತ್ತ ಭಾವವೇ ಕೊನೆಗೆಲ್ಲಾ...
ಇದುವೇ ನನ್ನ ಮಡಿದ ಕವನ.
ಅಲೆಗಳ ಸ್ಪರ್ಶಕೆ ಮನಸೋತ ದಡವು ಹಸಿಯಾಗುವುದು
ನಂಬಿದಲೆಗಳು ಕ್ಷಣದೊಳು ಹಿಂದೆ ಸರಿಯೇ, ದಡವು ಏಕಾಂಗಿಯಾಗುವುದು.
ಮಲಗಿದ್ದ ದಡಕೆ ಹಸಿ-ಭಾವ ನೀಡಿ, ಸ್ವಪ್ನಗಳ ಹುಸಿಯ ಮಾಡಿ
ಸಮಯ ಅನುಕಿಸಿ ನಗುತಿರೆ, ಇದ್ದು ಇರದ ಭಾವದ ಅನಾವರಣ
ಇದುವೇ ನನ್ನ ಮಡಿದ ಕವನ.
ದೇವ,ಯಾರು ಇರದ ಹೃದಯ ಮಂದಿರದಿ, ಒಲವ ದೇವತೆಯ ಕೂಡಿಸಿದೆ
ನಾ ಪೂಜೆಗೆ ಅಡಿಯಾಗುವಂತೆ ಮಾಡಿ, ಮುಡಿಗೆ ಹೂ ತರಲು ಹೋದ ಸಮಯದಿ
ಕ್ಷಣದಲಿ ಒಲವ ದೇವಿಯ ಕಣ್ಮರೆ ಮಾಡಿದೆ
ದೇವರಿಲ್ಲದ ದೇವಾಲಯದಿ, ಉಸಿರಾಡುವ ಶವ ನಾನಾದೆ
ಇದುವೇ ನನ್ನ ಮಡಿದ ಕವನ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)